Saturday, November 21, 2015


ತುಂಬಾ ದಿನಗಳ ನಂತರ ಬರೆದ ಪದ್ಯ


ಕಂಬಾಲಪಲ್ಲಿಯ ಬೇಯ್ಸಿದರೋ
ಖೈರ್ಲಾಂಜಿ ಬೆತ್ತಲೆ ಮಾಡಿದರೋ
ಬೆಲ್ಚಿ ಅಂದು ಬದನ್ವಾಳಲಿ ಕೊಂದು
ಮೊನ್ನೆ ಉತ್ತರ ನಿನ್ನೆ ಹರ್ಯಾಣದಿಹಾಲು ಹಸುಳೆಗಳ ಸುಟ್ಟರೋನಮ್ಮಜ್ಜಗೆ ಕೊಳ್ಳಿ ಇಟ್ಟರೋ...||ದಲಿತರ ಬೆನ್ನು ಬಿದ್ದರೋ
ಶತಮಾನಗಳೆಲ್ಲ ಒದ್ದರೋ....||
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ದುಡಿಮೆಗೆ ಬಿದ್ದು ಮೈ ಕಪ್ಪಾಯಿತು
ಆದರೂ ರಕ್ತವು ಕೆಂಪೇ ಇತ್ತು
ಗುಂಪು ಜೀವನ ಮಾಡುವ ‘ಮನು’ಜ
ದಲಿತನ ಮಾತ್ರ ಹೊರಗೆ ಇಟ್ಟ
ದಲಿತರ ಬೆನ್ನು ಬಿದ್ದರೋ
ಶತಮಾನಗಳೆಲ್ಲ ಒದ್ದರೋ....||
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ಮಳೆಗಾಳಿಯಲಿ ನೊಂದು ಬೆಂದರೂ
ದೇವರು ಮಾತ್ರ ಮುಟ್ಟಿಸಿಕೊಳ್ಳನು- ಇವರ
ದೇವರು ಧರ್ಮದ ರಕ್ಷಣೆಯಿಲ್ಲದೆ
ಬದುಕಲಿಲ್ಲವೆ ಶತ ಶತಮಾನ?
ಓ.. ದಲಿತ... ಕೇಳಲಿ ನಿನ್ನ ಮೊರೆತ-ಎ
ದ್ದೇಳ್ ದಲಿತ... ಮೊಳಗಲಿ ಭೋರ್ಗರೆತ||


ಅಂಬೇಡ್ಕರರು ಬಿತ್ತಿದ ಅಕ್ಷರ
ನಮ್ಮ ಕೇರಿಯೊಳಗರಳಿತು ಹೂವು
ಅರಳಿದ ಹೂವನು ಹೊಸಕಿ ಹಾಕಲು
ಅಲ್ಲಿಲ್ಲೆಲ್ಲಾ ಕಾದಿಹರಯ್ಯೋ...
ಎದ್ದೇಳ್ ದಲಿತ.. ಮೊಳಗಲಿ ಭೋರ್ಗರೆತ
ಓ ಕಲಿತ ದಲಿತ... ನಿನಗ್ಯಾಕ್ ಹಿಂಜರೆತ?