Wednesday, March 25, 2015

ಹಿರಿಯರಾದ ಪ್ರೊ. ಶಿವರಾಮಯ್ಯ ಅವರು 'ಕೊರಬಾಡು' ಓದಿ ಪ್ರತಿಕ್ರಿಯಿಸಿದ್ದು

ಅಯ್ ಸಂತೋಸು,
ನಿನ್ನ ಕೊರಬಾಡು ಸಂಗ್ರಹದ ಕತಾತರ ಕತೆಗಳನ್ನ ಜಿನಾ ಒಂದರಂತೆ ಬರಿತಾ ಹೋಗು- ಬರದು ಬರದೂ ಬಿಸಾಕ ಕೂಸು- ಅವು ಕಪಿಲಾ ಕನ್ನಡ ದೇಶದಲ್ಲಿ ಬದುಕಿ ಉಳದವು ಉಳಿಲಿ, ಆಗದವು ಕಪಿಲಾ ಪ್ರವಾಹದಲ್ಲಿ ತೇಲಿ ಹೋಗಲಿ ಕನ! ವಸ್ತು ಬಾಸೆ ಚೆನ್ನ ಕುಸುಮರ ಪ್ರೇಮದಂತೆ ಬೆರೆತಿರಬೇಕು ಕನುಡಾ! ನಂಜುಂಡ ಬೆಟ್ಟದ ಚಾಮುಂಡಿ ಲವ್ ಕತೆಗಳು ಎಂದ್ರೆ ಆದಿಮ ಜನಪದರ ಕತೆಗಳು. ಅವು ನಿಂಗೆ ಸ್ಫೂರ್ತಿ ಆಗಲಿ. ಆ ಗಣಿಯ ಬಗದೂ ಬಗದೂ ಬರೀತಾ ಹೋಗು. ಆಗ ನೀನ್ ದೊಡಡ ಕತೆಗಾರ ಆಗಬಹುದು ಮಗಾ! ದೇವನೂರ್ರು ಕೂಡ ಮೆಚ್ಚಿ 'ಅಹುದು ಅಹುದು' ಅನ್ನಬೇಕು- ಹಾಗ್ ಬರಿ

ಆದರೆ ನೆನಪಿರಲಿ, ಆಗ ಸಹಿಸಲಾರದವು ತಮಿಳಿನ ಆ ಪೆರುಮಾಳರಿಗೆ ಫೇಸ್ಬುಕ್ ಸಾವಿನಂತ ಸಾವಿಗೆ ವತ್ತಡ ಹಾಕಬಹುದು. ಅದಕ್ಕೆಲ್ಲ ಕೇರ್ ಮಾಡಬೇಡ. ಆ ಅಡ್ಡಗಾಲು ಬ್ರೇಕು ಝಾಡ್ಸಿ ಒದ್ದು ಮುಂದಕ್ಕೋಡು. ದೇವ್ರು, ಧರ್ಮ, ರಾಜಕಾರಣ ಯಾವತ್ತೂ ಬಿಟ್ಟಿದ್ದಲ್ಲ. ಅವುಗಳಲ್ಲಿರುವ ಜೀವ ವಿರೋಧಿ ಸಂಗತಿಗಳನ್ನು ಬಯಲು ಮಾಡೋದೆ ಸಾಹಿತ್ಯ. ಕಡೆಗೆ ಸತ್ಯಾನೆ ಗೆಲ್ಲೋದು. ನಿಂಗೆ ಒಳ್ಳೇದಾಗಲಿ

ನಿನ್ನ ಪ್ರೀತಿಯ
ಶಿವರಾಮಯ್ಯ

1 comment: